ದಾಸನ ಮಾಡಿಕೋ ಎನ್ನ ಸ್ವಾಮೀ । ಸಾಸಿರ ನಾಮದ ವೆಂಕಟರಮಣಾ ।।ಪಲ್ಲ॥
ದುರ್ಬುಧ್ಧಿಗಳನೆಲ್ಲ ಬಿಡಿಸೋ । ನಿನ್ನ ಕರುಣ ಕವಚವೆನ್ನ ಹರಣಕ್ಕೆ ತೊಡಿಸೊ ।।
ಚರಣ ಸೇವೆ ಎನಗೆ ಕೊಡಿಸೋ ಅಭಯಕರ ಪುಷ್ಪವನೆನ್ನ ಶಿರದಲಿ ಮುಡಿಸೋ ।।೧।।
ದೃಢ ಭಕ್ತಿ ನಿನ್ನಲ್ಲಿ ಬೇಡಿ ನಾ । ನಡಿಗೆರಗುವೆನಯ್ಯಾ ಅನುದಿನ ಪಾಡಿ ।।
ಕಡೆಗಣ್ಣ ಲೇಕೆನ್ನ ನೋಡಿ ಬಿಡುವೆ । ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ ।।೨।।
ಮೊರೆಹೊಕ್ಕವರ ಕಾವ ಬಿರುದು ಪೊತ್ತವ ಎನ್ನ ಮರೆಯದೇ ರಕ್ಷಿಸಯ್ಯಾ ಪೊರೆದು ।।೩।।
ದುರಿತಗಳೆಲ್ಲವ ತರಿದು ಸಿರಿ ಪುರಂದರ ವಿಠ್ಠ ಲ ಎನನ್ನು ಪೊರೆದು ।।೪।।
ದುರ್ಬುಧ್ಧಿಗಳನೆಲ್ಲ ಬಿಡಿಸೋ । ನಿನ್ನ ಕರುಣ ಕವಚವೆನ್ನ ಹರಣಕ್ಕೆ ತೊಡಿಸೊ ।।
ಚರಣ ಸೇವೆ ಎನಗೆ ಕೊಡಿಸೋ ಅಭಯಕರ ಪುಷ್ಪವನೆನ್ನ ಶಿರದಲಿ ಮುಡಿಸೋ ।।೧।।
ದೃಢ ಭಕ್ತಿ ನಿನ್ನಲ್ಲಿ ಬೇಡಿ ನಾ । ನಡಿಗೆರಗುವೆನಯ್ಯಾ ಅನುದಿನ ಪಾಡಿ ।।
ಕಡೆಗಣ್ಣ ಲೇಕೆನ್ನ ನೋಡಿ ಬಿಡುವೆ । ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ ।।೨।।
ಮೊರೆಹೊಕ್ಕವರ ಕಾವ ಬಿರುದು ಪೊತ್ತವ ಎನ್ನ ಮರೆಯದೇ ರಕ್ಷಿಸಯ್ಯಾ ಪೊರೆದು ।।೩।।
ದುರಿತಗಳೆಲ್ಲವ ತರಿದು ಸಿರಿ ಪುರಂದರ ವಿಠ್ಠ ಲ ಎನನ್ನು ಪೊರೆದು ।।೪।।